Krishna Avadhootaru
" ಶ್ರೀ ಕೃಷ್ಣಾವಧೂತರು " ಮಾಘ ಬಹುಳ ಚತುರ್ಥೀ ಶ್ರೀ ಕೃಷ್ಣಾವಧೂತರ ಆರಾಧನಾ ಮಹೋತ್ಸವ ಶ್ರೀ ಕೃಷ್ಣಾವಧೂತರು ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನಲ್ಲಿರುವ " ನಾರಾಯಣದೇವರ ಕೆರೆ " ಯೆಂಬ ಹಳ್ಳಿಯಲ್ಲಿ ಹುಟ್ಟಿದರು. ( ಇದು ತುಂಗಭದ್ರಾ ಜಲಾಶಯದ ಹಿನ್ನೀರಿನಲ್ಲಿ ಮುಳುಗಿದೆ ) ಕಾಲ : ಕ್ರಿ ಶ 1835 - 1909. ಶ್ರೀ ಕೃಷ್ಣಾವಧೂತರು ಶಾಂಡಿಲ್ಯ ಗೋತ್ರೋದ್ಭವರಾದ ಶ್ರೀ ವೆಂಕಟರಮಣಾಚಾರ್ಯ ಮತ್ತು ಸಾಧ್ವೀ ತ್ರಿವೇಣಿಬಾಯಿ ದಂಪತಿಗಳ ಪುತ್ರರು. ಇವರು 3 ತಿಂಗಳು ಕೂಸುಯಿದ್ದಾಗ ಸಂಡೂರಿನ " ಕುತ್ಸ " ಗೋತ್ರದ ಶ್ರೀ ಭೀಮಸೇನಾಚಾರ್ಯ ಎಂಬವರು ಇವರನ್ನು ದತ್ತಕ ತೆಗೆದುಕೊಂಡರು. ಶ್ರೀ ಕೃಷ್ಣಾವಧೂತರಿಗೆ ಶ್ರೀ ಭೀಮಸೇನಾಚಾರ್ಯರು " ಮಾಧವ " ನೆಂದು ಹೆಸರಿಡಲಾಯಿತು. ಅವರನ್ನು " ಮಾಧವಕೃಷ್ಣ " ನೆಂದೂ - " ಮುದ್ದುಕೃಷ್ಣ " ನೆಂದೂ ಕರೆದರು. " ರಾಧಾ " ಎಂಬುವಳೊಡನೆ ಶ್ರೀ ಮಾಧವಕೃಷ್ಣ ( ಶ್ರೀ ಕೃಷ್ಣಾವಧೂತರು ) ತಮ್ಮ 7ನೆಯ ವಯಸ್ಸಿನಲ್ಲಿ ಮದುವೆಯಾದರು. 11ನೇ ವಯಸ್ಸಿನಲ್ಲಿ ತಾಯಿಯನ್ನೂ - 15ನೇ ವಯಸ್ಸಿನಲ್ಲಿ ತಂದೆಯನ್ನೂ ಕಳೆದುಕೊಂಡರು. " ಮೈಸೂರಿಗೆ ಪಯಣ " ತಂದೆ ತಾಯಿಗಳ ಮರಣಾನಂತರ ಮನೆಯಲ್ಲಿ ಅವರ ತಂಗಿ ಸರಸ್ವತೀಬಾಯಿ ಅವರ ಒಳ ಸಂಚಿನಿಂದಾಗಿ ಮುದ್ದುಕೃಷ್ಣ ಮತ್ತು ಅವರ ಹೆಂಡತಿ ನಡುವೆ ಪರಸ್ಪರ ತಪ್ಪು ಕಲ್ಪನೆ ಹುಟ್ಟುವಂತೆ ಮಾಡಿದರು. ಶ್...