24 Keshava Namaroopa
ಕೇಶವನ 24 ರೂಪಗಳನ್ನು ಅವನ ಆಯುಧಗಳಿಂದ ಹೇಗೆ ಗುರುತಿಸುವುದು.
ಕೆಳಗೆ ಕೊಟ್ಟಿರುವ ಅವನ ಆಯುಧಗಳನ್ನು ಮೊದಲು ಹಿಂಬದಿಯ ಬಲಗೈ ನಂತರ
ಹಿಂಬದಿಯ ಎಡಗೈ ನಂತರ ಮುಂಬದಿಯ ಎಡಗೈ ನಂತರ ಮುಂಬದಿಯ ಬಲಗೈ ನಲ್ಲಿ
ಇದೆಯೆಂದು ತಿಳಿಯಬೇಕು.
1) ಕೇಶವ (ಶಂಕು, ಚಕ್ರ, ಗಧ, ಪದ್ಮ)
2) ನಾರಾಯಣ (ಪದ್ಮ, ಗಧ, ಚಕ್ರ, ಶಂಕು)
3) ಮಾಧವ (ಚಕ್ರ, ಶಂಕು, ಪದ್ಮ, ಗಧ)
4) ಗೋವಿಂದ (ಗಧ, ಪದ್ಮ, ಶಂಕು, ಚಕ್ರ)
5) ವಿಷ್ಣು (ಪದ್ಮ, ಶಂಕು, ಚಕ್ರ, ಗಧ)
6) ಮಧುಸೂದನ (ಶಂಕು, ಪದ್ಮ, ಗಧ, ಚಕ್ರ)
7) ತ್ರಿವಿಕ್ರಮ (ಗಧ, ಚಕ್ರ, ಶಂಕು, ಪದ್ಮ)
8) ವಾಮನ (ಚಕ್ರ, ಗಧ, ಪದ್ಮ, ಶಂಕು)
9) ಶ್ರೀಧರ (ಚಕ್ರ, ಗಧ, ಶಂಕು, ಪದ್ಮ)
10) ಹೃಶೀಕೇಶ (ಚಕ್ರ, ಪದ್ಮ, ಶಂಕು, ಗಧ)
11) ಪದ್ಮನಾಭ (ಪದ್ಮ, ಚಕ್ರ, ಗಧ, ಶಂಕು)
12) ದಾಮೋದರ (ಶಂಕು, ಗಧ, ಚಕ್ರ, ಪದ್ಮ)
13) ಸಂಕರ್ಷಣ (ಶಂಕು, ಪದ್ಮ, ಚಕ್ರ, ಗಧ)
14) ವಾಸುದೇವ (ಶಂಕು, ಚಕ್ರ, ಪದ್ಮ,ಗಧ)
15) ಪ್ರದ್ಯುಮ್ನ (ಶಂಕು, ಗಧ, ಪದ್ಮ, ಚಕ್ರ)
16) ಅನಿರುದ್ಧ (ಗಧ, ಶಂಕು, ಪದ್ಮ, ಚಕ್ರ)
17) ಪುರುಷೋತ್ತಮ (ಪದ್ಮ, ಶಂಕು, ಗಧ, ಚಕ್ರ)
18) ಅಧೋಕ್ಷಜ (ಗಧ, ಶಂಕು, ಚಕ್ರ, ಪದ್ಮ)
19) ನರಸಿಂಹ (ಪದ್ಮ, ಗಧ, ಶಂಕು, ಚಕ್ರ)
20) ಅಚ್ಯುತ (ಪದ್ಮ, ಚಕ್ರ, ಶಂಕು, ಗಧ)
21) ಜನಾರ್ಧನ (ಚಕ್ರ, ಶಂಕು, ಗಧ, ಪದ್ಮ)
22) ಉಪೇಂದ್ರ (ಗಧ, ಚಕ್ರ, ಪದ್ಮ, ಶಂಕು)
23) ಹರಿ (ಚಕ್ರ, ಪದ್ಮ, ಗಧ, ಶಂಕು)
24) ಶ್ರೀಕೃಷ್ಣ (ಗಧ, ಪದ್ಮ, ಚಕ್ರ, ಶಂಕು)
(ಗಾಯಿತ್ರಿ ಮಂತ್ರದ 24 ಅಕ್ಷರಗಳೇ ಈ 24 ಕೇಶವನಾಮಗಳು)
ಗಾಯಿತ್ರಿಯ ಮಂತ್ರದ ಪ್ರಕಾರ:
ತತ್ = ಕೇಶವ -----------ಸ್ಯ = ವಾಸುದೇವ
ಸ = ನಾರಾಯಣ---------ಧೀ = ಸಂಕರ್ಷಣ
ವಿ = ಮಾಧವ-------------ಮ = ಪ್ರದ್ಯುಮ್ನ
ತು: = ಗೋವಿಂದ-----------ಹಿ = ಅನಿರುದ್ಧ
ವ = ವಿಷ್ಣು----------------ಧಿ = ಪುರುಷೋತ್ತಮ
ರೇ = ಮಧುಸೂಧನ------ಯೊ = ಅಧೋಕ್ಷಜ
ಣಿ = ತ್ರಿವಿಕ್ರಮ------------ಯೋ= ನಾರಸಿಂಹ
ಯಮ್= ವಾಮನ-------------ನ: = ಅಚ್ಯುತ
ಭರ್ = ಶ್ರೀಧರ--------------ಪ್ರ = ಜನಾರ್ಧನ
ಗ: = ಹೃಶೀಕೇಶ-----------ಚೋ = ಉಪೇಂದ್ರ
ದೇ = ಪದ್ಮನಾಭ-----------ದ = ಹರಿ
ವ = ದಾಮೋಧರ--------ಯಾತ್ = ಕೃಷ್ಣ
#ಇಪ್ಪತ್ತನಾಲ್ಕುಕೇಶವಾದಿನಾಮಗಳ_ಅರ್ಥ
1. ಕೇಶವ - ಬ್ರಹ್ಮ ರುದ್ರರಿಗೆ ಪ್ರೇರಕ,
2. ನಾರಾಯಣ - ಗುಣಪೂರ್ಣ
3. ಮಾಧವ - ಲಕ್ಷೀ ರಮಣ,
4. ಗೋವಿಂದ - ವೇದ ವೇದ್ಯ
5. ಮಧುಸೂದನ - ಮಧು ದೈತ್ಯನನ್ನು ಕೊಂದವ
6. ವಿಷ್ಣು- ಸರ್ವ ವ್ಯಾಪಿ
7. ತಿವಿಕ್ರಮ-ಮೂರು ಹೆಜ್ಜೆ ಇಟ್ಟವನು
8. ವಾಮನ-ಮಂಗಳಕರ
9. ಶ್ರೀಧರ-ಲಕ್ಷೀಯನ್ನು ಎದೆಯಲ್ಲಿ ಧರಿಸಿದವನು
10. ಹೃಷಿಕೇಶ- ಇಂದ್ರಿಯಗಳ ದೇವತೆ.
11. ಪಧ್ಮನಾಭ- ನಾಭಿಯಲ್ಲಿ ಪದ್ಮವನ್ನು ಹೊಂದಿರುವವನು.
12. ದಾಮೋಧರ -ಹೋಟ್ಟೆಯ ಮೇಲೆ ಹಗ್ಗದಿಂದ ಕಟ್ಟಲ್ಪಟ್ಟವನು.
13. ಸಂಕರ್ಷಣ-ಪ್ರಳಯಕಾಲದಲ್ಲಿ ಎಲ್ಲರನ್ನು ಸೆಳೆಯುವವನು
14. ವಾಸುದೇವ- ಜಗದಾಧಾರ
15. ಪ್ರದ್ಯುಮ್ನ -ಉತ್ತಮ ಐಶ್ವರ್ಯ ನೀಡುವವನು
16. ಅನಿರುದ್ದ-ತನ್ನಾಜ್ಞೆಗೆ ಯಾರಿಂದಲೂ ತಡೆ ಇಲ್ಲದವನು
17. ಪುರುಷೋತ್ತಮ-ಎಲ್ಲ ಜೀವರಿಗಿಂತಲೂ ಲಕ್ಷಿಗಿಂತಲೂ ಉತ್ತಮ
18. ಅಧೊಕ್ಷಜ- ಇಂದ್ರಿಯಗಳಿಗೆ ನಿಲಕದವನು
19. ನಾರಸಿಂಹ- ನರ ಮತ್ತು ಸಿಂಹ ಆಕೃತಿ ಉಳ್ಳವನು
20. ಅಚ್ಚುತ- ತನ್ನ ಸಾಮರ್ಥ್ಯಕ್ಕೆ ಎಂದೂ ಚ್ಯುತಿ ಇಲ್ಲದವನು
21. ಜನಾರ್ಧನ-ಜನನವಿಲ್ಲದಂತೆ ಮಾಡುವವನು
22. ಉಪೇಂದ್ರ- ಎಲ್ಲಾ ಇಂದ್ರರಿಗಿಂತ ಉತ್ತಮ
23. ಹರ-ಪಾಪ ಪರಿಹಾರಕ
24. ಶ್ರೀ ಕೃಷ್ಣ-ಲೋಕ ನಿಯಾಮಕನಾಗಿದ್ದು ಎಲ್ಲವನ್ನು ಸೆಳೆದು ಕೊಳ್ಳುವವನು...
Il ಶ್ರೀ ಕೃಷ್ಣಾರ್ಪಣಮಸ್ತು ll
Comments
Post a Comment