Sheshadasara Ugabhogagalu
ಮೊದಲಕಲ್ಲು ಶ್ರೀ ಶೇಷದಾಸರ ಉಗಾಭೋಗ
ಗುರು ವಿಜಯರಾಯರಂದು ಸಮ್ಮುಖದಲ್ಲಿ ಬಂದು
ಪರಿವ್ಯಾಪ್ತನಾದ ಶ್ರೀಹರಿಯ ವಿವಿಕ್ಷದಿ
ಪರಿಪರಿ ವಿಧದಿಂದ ಸ್ತುತಿಸಿ ಪ್ರಾಂತ್ಯದಲ್ಲಿ
ಗುರುವಿಜಯವಿಠಲನ್ನ ಸೇವಕ ನೀನೆಂದು
ಕಾರಣದಿಂದ ನಿನಗೆ ಇದೇ ಮುದ್ರಿಕವು ಎಂಬ
ತೆರವಾದ ಸಂಜ್ಞವೆಂದು ಸೂಚಿಸಿದಿ
ಪರಮ ಧನ್ಯನಾದೆ ಗುರು ವಿಜಯದಾಸರಿಗೆ
ಚರಣ ಸೇವಕನಾದೆ ನಿನ್ನ ದಯದಿ
ಗುರುಗಳ ದ್ರೋಹದಿಂದ ಮುಕ್ತನಾಗಿ ನಿನ್ನ
ಕುರುಹು ಕಾಣುವ ಅಧಿಕಾರಿಯಾದೆ
ಪರಿಪೂರ್ಣ ಕೃಪಾನಿಧೆ ಗುರುವಿಜಯವಿಠಲ ನಿನ್ನ
ಕರುಣದ ಫಲವಿದೆ ಬಾಳಿದದಕೆ.॥
ದೈತ್ಯನ್ನ ವಧೆಗಾಗಿ ಶಪಥ ಮಾಡಲಾಗಿ
ಕೃತ್ತಿವಾಸನ ದ್ವಾರ ಕೃಪೆಯ ಮಾಡಿ
ಕತ್ತಲೆಗೈಸಿ ಶಿರ ಕಿತ್ತಿ ಚಂಡಾಡಿಸಿ
ಭಕ್ತನ ಪ್ರತಿಜ್ಞೆಕ್ಕೆ ಗೆಲೆಸಿದಂಥ
ಸತ್ಯವಾದ, ರೂಢಿ ತ್ರಿಜಗವು ಬಲ್ಲದು
ಪೃಥ್ವಿಪಾಲಕನಾದ ಸಾರ್ವಭೌಮನು ಪರಮ-
ರಿಕ್ತ ಅನುಭವ ಪೇಳಿ ಹಿಗ್ಗುವಂತೆ
ಉತ್ತಮೋತ್ತಮ ನಿನ್ನ ಇನಿತು ತಿಳಿದು
ಭಕ್ತಿಯಿಲ್ಲದೆ ಸಥೆಯಿಂದ ನುಡಿದಂಥ
ಉಕ್ತಿಗೆ ವ್ಯಾಹತಿ ತಂದದಕ್ಕ ನಿನ್ನ
ಮಿತ್ರತ್ವ ಏನುಂಟು ಇದರೊಳಗೆ
ಭೃತ್ಯರ ಅಭಿಮಾನ ಕಾಯದಿದ್ದರೆ ಒಡೆಯ
ಕೀರ್ತಿಯೈದುವೆನೇನೋ ಮಾನ್ಯನಾಗಿ
ಸತ್ಯಸಂಕಲ್ಪ ಗುರುವಿಜಯವಿಠಲರೇಯ
ಈ ತೆರದಲಿ ಮಾಡದಲಿರು ಎಂದಿಗನ್ನ॥
ಇನ್ನೆಷ್ಟು ಕಾಲಕ್ಕು ಮರಿಯಾದಂತೆ ಮಾಡಿಸಿದಿ
ಉನ್ನತಮಹಿಮ ನಿನ್ನ ಇಚ್ಛಕ್ಕೆ ಯದಿರಾರೊ
ಇನ್ನಾದರೂ ಕೃಪೆಯಿಂದ ನೋಡದಿರೆ
ಘನ್ನವಾದ ದುಃಖದಿಂದ ಕಡಿಗೆ ಐದುವಿನೆಂತೊ
ಚಿನ್ಮಯಮೂರುತಿ ಗುರುವಿಜಯವಿಠಲರೇಯ
ಗುರು ವಿಜಯರಾಯರಂದು ಸಮ್ಮುಖದಲ್ಲಿ ಬಂದು
ಪರಿವ್ಯಾಪ್ತನಾದ ಶ್ರೀಹರಿಯ ವಿವಿಕ್ಷದಿ
ಪರಿಪರಿ ವಿಧದಿಂದ ಸ್ತುತಿಸಿ ಪ್ರಾಂತ್ಯದಲ್ಲಿ
ಗುರುವಿಜಯವಿಠಲನ್ನ ಸೇವಕ ನೀನೆಂದು
ಕಾರಣದಿಂದ ನಿನಗೆ ಇದೇ ಮುದ್ರಿಕವು ಎಂಬ
ತೆರವಾದ ಸಂಜ್ಞವೆಂದು ಸೂಚಿಸಿದಿ
ಪರಮ ಧನ್ಯನಾದೆ ಗುರು ವಿಜಯದಾಸರಿಗೆ
ಚರಣ ಸೇವಕನಾದೆ ನಿನ್ನ ದಯದಿ
ಗುರುಗಳ ದ್ರೋಹದಿಂದ ಮುಕ್ತನಾಗಿ ನಿನ್ನ
ಕುರುಹು ಕಾಣುವ ಅಧಿಕಾರಿಯಾದೆ
ಪರಿಪೂರ್ಣ ಕೃಪಾನಿಧೆ ಗುರುವಿಜಯವಿಠಲ ನಿನ್ನ
ಕರುಣದ ಫಲವಿದೆ ಬಾಳಿದದಕೆ.॥
ದೈತ್ಯನ್ನ ವಧೆಗಾಗಿ ಶಪಥ ಮಾಡಲಾಗಿ
ಕೃತ್ತಿವಾಸನ ದ್ವಾರ ಕೃಪೆಯ ಮಾಡಿ
ಕತ್ತಲೆಗೈಸಿ ಶಿರ ಕಿತ್ತಿ ಚಂಡಾಡಿಸಿ
ಭಕ್ತನ ಪ್ರತಿಜ್ಞೆಕ್ಕೆ ಗೆಲೆಸಿದಂಥ
ಸತ್ಯವಾದ, ರೂಢಿ ತ್ರಿಜಗವು ಬಲ್ಲದು
ಪೃಥ್ವಿಪಾಲಕನಾದ ಸಾರ್ವಭೌಮನು ಪರಮ-
ರಿಕ್ತ ಅನುಭವ ಪೇಳಿ ಹಿಗ್ಗುವಂತೆ
ಉತ್ತಮೋತ್ತಮ ನಿನ್ನ ಇನಿತು ತಿಳಿದು
ಭಕ್ತಿಯಿಲ್ಲದೆ ಸಥೆಯಿಂದ ನುಡಿದಂಥ
ಉಕ್ತಿಗೆ ವ್ಯಾಹತಿ ತಂದದಕ್ಕ ನಿನ್ನ
ಮಿತ್ರತ್ವ ಏನುಂಟು ಇದರೊಳಗೆ
ಭೃತ್ಯರ ಅಭಿಮಾನ ಕಾಯದಿದ್ದರೆ ಒಡೆಯ
ಕೀರ್ತಿಯೈದುವೆನೇನೋ ಮಾನ್ಯನಾಗಿ
ಸತ್ಯಸಂಕಲ್ಪ ಗುರುವಿಜಯವಿಠಲರೇಯ
ಈ ತೆರದಲಿ ಮಾಡದಲಿರು ಎಂದಿಗನ್ನ॥
ಇನ್ನೆಷ್ಟು ಕಾಲಕ್ಕು ಮರಿಯಾದಂತೆ ಮಾಡಿಸಿದಿ
ಉನ್ನತಮಹಿಮ ನಿನ್ನ ಇಚ್ಛಕ್ಕೆ ಯದಿರಾರೊ
ಇನ್ನಾದರೂ ಕೃಪೆಯಿಂದ ನೋಡದಿರೆ
ಘನ್ನವಾದ ದುಃಖದಿಂದ ಕಡಿಗೆ ಐದುವಿನೆಂತೊ
ಚಿನ್ಮಯಮೂರುತಿ ಗುರುವಿಜಯವಿಠಲರೇಯ
ಎನ್ನ ಅಪರಾಧ ನಿನಗೆ ಅರ್ಪಿತವು॥
Comments
Post a Comment